Showing posts with label ಹರಟೆ. Show all posts
Showing posts with label ಹರಟೆ. Show all posts

Sunday, April 25, 2010

ಶೃಂಗೇರಿಯಲ್ಲಿ ನಾಕು ಹೆಜ್ಜೆ...


ಶೃಂಗೇರಿಗೆ ಒಂದು ದಿನದ ಪುಟ್ಟ ಟ್ರಿಪ್ ಮುಗಿಸಿ ಬರೋವಾಗ ಹೊರಗೂ ಒಳಗೂ ಮಳೆ...
ಬಾಲ್ಯದ ಬೇಸಿಗೆ ರಜಗಳಲ್ಲಿ ವಾರಗಟ್ಟಲೆ ಹೋಗ್ತಿದ್ದ ದಿನಗಳನ್ನ ನೆನಪಿಸಿಕೊಂಡಾಗ ನಿಜವಾ ಅನ್ನಿಸೋ ಅಷ್ಟು ಬದಲಾಗಿದೆ, ಎಲ್ಲ!

ಬೆಂಗಳೂರಂದ್ರೆ ಬೆರಗುಗಣ್ಣಾಗೋ ಪುಟ್ಟ ಊರು,ಜಗುಲಿಯಲ್ಲಿ ಕೂತು ಓದುತ್ತಿದ್ದ ಆ ಹಳೆಯ ಮಯೂರ/ಸುಧಾ ಸಂಚಿಕೆಗಳು, ಮನೆಯ ಹಿತ್ತಲಿನ 'ಸಣ್ಣ್ ಹೊಳೆ'(ಹರಿವು ಕಮ್ಮಿಯಿರೋ ಈಗ ಪಾರ್ಕಿಂಗ್ ಲಾಟ್ ಆಗಿರೋ ಹೊಳೆ ದಂಡೆ)ಯಲ್ಲಿ ಆಟ... ಅಲ್ಲಿನ ಮೀನುಗಳೂ ಪುಟ್ಟ ಪುಟ್ಟವು!
ಹಿತ್ತಲ ಬಿಳಿ ಗುಲಾಬಿ ಮೊಗ್ಗುಗಳ 'ಹೇರ್ ಬ್ಯಾಂಡ್'(ಜೊತೆಗೆ ಅದು ಪ್ರತಿಷ್ಠಾಪಿತವಾಗ್ತಿದ್ದ ಆ ಎರಡು ಜಡೆಗಳು!)...ಅಬ್ಬಲಿಗೆ?(ನನ್ನ್ ಪ್ರಕಾರ ಕನಕಾಂಬರದ ದೊಡ್ಡಕ್ಕ), ಪಿಂಕ್ ಸ್ಫಟಿಕ...
ಕೆಂಪಕ್ಕಿ ಅನ್ನದ ಜೊತೆ ಘಮ್ಮನ್ನೋ ಮಿಡಿಮಾವಿನಕಾಯಿ ಉಪ್ಪಿನಕಾಯಿ(ಬಾಟಲ್ ತುಂಬಿ ಬೆಂಗಳೂರಿಗೂ ಬರುತ್ತಿತ್ತು!)...ಸಂಜೆಯ ದೇವಸ್ಥಾನದ ವಿಜಿಟ್, ಅತ್ತೆ ಮಾಡ್ತಿದ್ದ ಚಕ್ಕುಲಿ, ರವೆ ಉಂಡೆ, ತಂಬುಳಿ, ಚಟ್ನಿ...ಮಠದ ಊಟದ 'ಮಣಿ ಮಣಿ ಪಾಯ್ಸ'
ಪ್ರೀತಿಯ ತಾತನ ನಿತ್ಯ ತುಂಗಾ ಸ್ನಾನ, ಪೂಜೆ, ಹಲಸಿನ ಹಣ್ಣು, ಕಾಫಿ ಪುಡಿ ಮಷೀನು, ಸೊಸೆ-ಮೊಮ್ಮಕ್ಕಳಿಗೆ ಮಾತ್ರ ಮಾಯವಾಗ್ತಿದ್ದ 'ದೂರ್ವಾಸ ಕೋಪ'!:)....
ಕಳೆದ ಆ ಸರಳ ಸುಂದರ ಪುಟ್ಟ ಪ್ರಶಾಂತ ಪ್ರಪಂಚಕ್ಕೆ ನೆನಪಿನ ಸಿಹಿಯ ಕೊಡುಗೆ ಎಷ್ಟಿದೆಯೋ ಗೊತ್ತಿಲ್ಲ!:)

ಗಂಟೆಗಟ್ಟಲೇ ನಿಧಾನಕ್ಕೆ ಕೂತು ಶಾರದೆಯ ಜೊತೆ ಹೊಡೆಯುತ್ತಿದ್ದ ಲೋಕಾಭಿರಾಮದ ಹರಟೆ ಈಗ 'ಮುಂದ್ ಹೋಗಿ' ಕೂಗುಗಳಿಗೆ ಬಲಿ!
ಮಾವಿನ ಮಿಡಿಗಳೆಲ್ಲ ಒಂದಲ್ಲದೇ ಹತ್ತು ಹಲವಾಗಿ ತುಂಬಿರೋ ಸಂಡಿಗೆ-ಹಪ್ಪಳ-ಉಪ್ಪಿನಕಾಯಿ ಅಂಗಡಿಗಳ ಡಬ್ಬಗಳಲ್ಲಿ!
ಬೆಟ್ಟಕ್ಕೆ ಹೋಗೋ ದಾರಿಯಲ್ಲಿ ಅಜ್ಜಿಯ ತಮ್ಮನ ಮನೆ, ಸರಸ್ವತಮ್ಮ ನೆನಪಾಗಿ ಸಂದ ಮೇಲೀಗ ಬರೀ ನೆನಪು...
ಅನಂತ ಹೊಳ್ಳರ ಕ್ಯಾಂಟೀನಿನಲ್ಲಿ ಇನ್ನು ಅನಂತ ಹೊಳ್ಳರಿಲ್ಲ. ಇಡ್ಲಿ-ವಡೆ-ದೋಸೆ-ಬಜ್ಜಿ ಟಿಫನ್ ಸೆಂಟರುಗಳಲ್ಲಿ ಈಗ ಸಂಜೆ ಮ್ಯಾಗಿ ಲಭ್ಯ! ಕರಿಬೇವಿನ ಒಗ್ಗರಣೆ ಹಾಕಿದ ಗೋಬಿ ಮಂಚೂರಿಯನ್ನೂ ಶೃಂಗೇರಿಗೆ ಬಂದಾಯ್ತು!!

ತಾತ ಇದ್ದ ಮೂರು ಮನೆಗಳಲ್ಲಿ ಒಂದು ಯಾತ್ರಿ ನಿವಾಸ್ ಗೆ ದಾರಿ ಬಿಟ್ಟು ವರ್ಷಗಳಾಯ್ತು. (ಆದ್ರೂ ಮಠದ ವಸತಿಗೃಹಗಳಲ್ಲಿ ಈಗ ರಜಾ ದಿನಗಳೆಲ್ಲ 'ಹೌಸ್‌ಫುಲ್'! ಒಂದು ದಿನಕ್ಕೆ ಸಿಗಬಹುದು, ಎರಡು ದಿನ ಕಷ್ಟ, ವಾರ ವಾರ ಇರೋದು ಇನ್ನು ಕನಸು!)
ಎರಡನೆಯದ್ದು ಈಗ ಅಂಗಡಿಸಾಲಿಗೆ ಸೇರಾಯ್ತು. 'ತಾತನ ಮನೆ' ಅನ್ನೋ ನೆನಪಿಗೆ ಉಳಿದಿರೋ ಕೊನೆಯ ಲಿಂಕ್ ಮೂರನೆಯದ್ದು ಯಾವತ್ತು ಏನಾಗುತ್ತೆ ಅಂತ ಯೋಚಿಸುತ್ತಾ, ನಮ್ಮ ನಾಸ್ಟಾಲ್ಜಿಯಾ ಹಳಹಳಿಕೆಗಳಿಗೆ ಊರು ನಿಂತಲ್ಲೇ ನಿಲ್ಲೋಕಾಗುತ್ತಾ ಅಂತ ಸಮಾಧಾನ ಮಾಡಿಕೊಳ್ತಾ, ಶೃಂಗೇರಿಯಲ್ಲೊಂದು ಪುಟ್ಟ ಮನೆ ಅನ್ನೋ ಅಪ್ಪ- ಅಮ್ಮನ ಕನಸಿಗೆ ಈಗ ನಾನು, ನನ್ನ ತಮ್ಮ ಸೇರಿಕೊಳ್ತಿರೋ ಹಾಗೇ, ಅಯ್ಯರ್ ಮಾಮಾ-ಮಾಮಿಗಳು ತುಂಬಿಕೊಳ್ತಾ ಎತ್ತರೆತ್ತರಕ್ಕೆ 'ಲೋಕಲ್' ಜನರ ಕೈ ಕಾಲು, ಕಣ್ಣು ಮೀರಿ ಬೆಳೆಯುತ್ತಿರೋ ರಿಯಲ್ ಎಸ್ಟೇಟ್ ರೇಟು... ಸ್ವಲ್ಪ ಹೆಚ್ಚಾದ್ರೂ ಹೇಗೋ ಒಂದು ಪುಟ್ಟ ಮನೆಯಾಗಿಬಿಟ್ರೆ ನಮ್ಮದೇ ಊರಿನಲ್ಲಿ ರೂಮ್ ಸಿಗದೇ ಕವಿಯೋ ಅನಾಥಪ್ರಜ್ನೆಗೆ ಸ್ವಲ್ಪ ಮುಕ್ತಿ ಅಂದುಕೊಳ್ಳೋವಾಗ್ಲೇ ಅಯ್ಯರ್ ಕ್ಯಾಪಿಟಲಿಸ್ಮ್‌ನ ಮಿನಿ ರೂಪ ನಮ್ಮ ಬೆಂಗಳೂರು 'ಬಯಿಂಗ್ ಪವರ್' ಅನ್ನೋ ಕಸಿವಿಸಿಯೂ ಸೇರುತ್ತಾ..., ಯಾವಾಗ್ಲೋ ವರ್ಷಕ್ಕೆ ಎರಡು ಸಲ ಹೋಗಿ ನಾಕು ದಿನ ಇದ್ದುಬರೋಕೆ ಅಲ್ಲೇ ಬದುಕುವವರ ಸ್ವಂತ ಜಾಗದ ಕನಸುಗಳಿಗೆ ನಮ್ಮದೂ ಪೆಟ್ಟು ಹಾಕ್ಬೇಕಾ ಅನ್ನಿಸುತ್ತಾ...
ಅಜ್ಜ ಹುಟ್ಟಿ ಬೆಳೆದ ದಕ್ಷಿಣ ಕನ್ನಡ, ಅಪ್ಪ ಬೆಳೆದ ಶೃಂಗೇರಿ, ಅಮ್ಮನ ಮೈಸೂರು, ನಮ್ಮ ಬೆಂಗಳೂರುಗಳಲ್ಲಿ ನಮ್ಮೂರು ಅನ್ನೋ ಹಕ್ಕು ಎಲ್ಲಿಗೆ ಸಲ್ಲುತ್ತೆ ಅನ್ನೋ ಪ್ರಶ್ನೆಗೆ ಎಲ್ಲವೂ, ಯಾವ್ದೂ ಅಲ್ಲ, ಅಥ್ವಾ ಇದು ಹೆಚ್ಚು ಇದು ಕಡಿಮೆ ಅಂತ ಏನೇನೋ ಉತ್ತರಗಳಂತೆ ಹೊಳೆದು ಮಾಯವಾಗುತ್ತಾ... ನೆಲೆ, ಮೂಲ ಎಲ್ಲದರ ಬಗ್ಗೆ ಪ್ರಶ್ನೆಗಳು ಎರ್ರಾಬಿರ್ರಿ ತಲೆಯಲ್ಲಿ ತುಂಬಿಕೊಳ್ತಾ...

ಮತ್ತೆ ಮೆಲುಕಿಗೆ ಅನಂತ ಹೊಳ್ಳರ ಮಕ್ಕಳು ಹತ್ತಿಸಿ ಕಳಿಸಿದ ಆಟೋ, ಅಪ್ಪನ ಬಾಲ್ಯಸ್ನೇಹಿತರ ಮನೆಯ ಆತಿಥ್ಯ, ಕಚೇರಿಗೆ ನೈಭಿಗೆ ಬಂದ ತಮ್ಮ ಕಟ್ಟಿಕೊಂಡು ಬಂದ ತಾತನ ನೆನಪುಬುತ್ತಿ(ಅಲ್ಲಿಗೆ ಮೃದಂಗವನ್ನ ಪರಿಚಯ್ಸಿದೋರು ತಾತನೇ ಅಂತೆ! ಇಂದು ಅಲ್ಲಿ ಸಂಗೀತವನ್ನು ಉಳಿಸಿ ಬೆಳೆಸ್ತಿರೋ ಹಿರಿಯರಿಗೆ ಅಂದು ತಾತ ಹೀರೋ; ಗುಂಪು ಕಟ್ಟಿ ಕಚೇರಿ ನಡೆಸ್ತಿದ್ದ ಅಪ್ಪ, ಅಪ್ಪನ ಗೆಳೆಯರು ಸ್ಫೂರ್ತಿ!)...ಬೆಟ್ಟದ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಓ ಪುಂಡ್ರೀಕ ಭಟ್ರು ಚೆನ್ನಾಗಿ ಗೊತ್ತು ಅಂತ ಅಂದಾಗ... ಎಲ್ಲೋ ಇನ್ನೂ ಅಲ್ಲೇ ಅಂಟಿರುವ ನಂಟು ಹೊಸದಾಗಿ ತೆರೆದುಕೊಳ್ಳುತ್ತಾ...

ಏನಿರಲಿ ಇಲ್ಲದಿರಲಿ ಇಲ್ಲಿಯವರೆಗೆ ಹಾದಿ ನೆರಳಾಗಿ ಕಾಯ್ದಿರುವ ಶಾರದೆ ಹಾಗೇ ಇರ್ತಾಳನ್ನೋ ನಂಬಿಕೆಯಲ್ಲಿ ನೆಲೆ ಕಂಡು ಐರಾವತದಲ್ಲಿ(ಮಳೆ ಬಂದ್ರೆ ಸೋರತ್ತೆ!!) ಕೂತಾಗ ರವಿಚಂದ್ರನ್ ಸಿನೆಮಾ ಟಿವಿಯಲ್ಲಿ ಪ್ರತ್ಯಕ್ಷವಾಗಿ, ಶಾರದೆಗೆ ಮುಗಿ ಬೀಳೋ ಜನ ಹೆಣ್ಣನ್ನ ಸ್ಟಿರಿಯೋಟೈಪ್ ಶರಣಾಗತಿಗಳಲ್ಲೇ ಕನಸುವ ಪರಿಗೆ ಇನ್ನಷ್ಟು ಕನ್ಫ್ಯೂಸ್ ಆಗಿ, ನಮ್ಮ ಸಂಸ್ಕೃತಿಯ ವಿಚಿತ್ರ ವೈರುಧ್ಯ-ವೈವಿಧ್ಯಗಳಿಗೆ ಮತ್ತೆ ದಿಗ್ಭ್ರಮೆ!

ಅಂದ್‌ಹಾಗೆ ದೇವಸ್ಥಾನದ ಸ್ನಾನ ಘಟ್ಟದ ಪಕ್ಕದಲ್ಲಿ ಮರಳ ಸೇತುವೆ, ಬಿದಿರು ಸೇತುವೆ ಹಾಗೂ ಈಗಿನ ಸಿಮೆಂಟು 'ವಿದ್ಯಾತೀರ್ಥ ಸೇತುಃ'ಗಳೆಲ್ಲಕ್ಕೂ ಸಾಕ್ಷಿಯಾಗಿ ನಿಂತಿದ್ದ ಅರಳೀಮರ ಈ ಸಲದ ಮಿಸ್ಸಿಂಗ್ ಲಿಸ್ಟಿಗೆ ಇನ್ನೊಂದು ಹೊಸ ಸೇರ್ಪಡೆ!

Sunday, December 06, 2009

ಪ್ರೀತಿಯ ಸಿನೆಮಾ

ನನ್ನ ಮಿಕ್ಕೆಲ್ಲ ಸೋಮಾರಿ ಪ್ಲ್ಯಾನುಗಳಂತೆ 'ಸಿನೆಮಾ ಪ್ಯಾರಡಿಸೋ'
ನೋಡಬೇಕು ಅನ್ನೂದಕ್ಕೂ ವರ್ಷ ದಾಟಿದ ಮೇಲೆ ಕೊನೆಗೂ ಮುಹೂರ್ತ ಬಂತು! ನೋಡೋಕೆ ಅಂತ ಕೂತ್ಕೊಳ್ಳೋಕೆ ವರ್ಷವಾದ್ರೂ ಫ್ಯಾಶ್ಬ್ಯಾಕ್ ನಲ್ಲಿ ತೆರೆದುಕೋಳ್ಳೋ ಚಿತ್ರ ನಿರ್ದೇಶಕನೊಬ್ಬನ ಬದುಕು, ಪ್ರೀತಿಗಳ ಈ ಕಥೆಪ್ರೀತಿಯಲ್ಲಿ ಮುಳುಗಿಹೊಗೋಕೆ ಮಾತ್ರ ನಿಮಿಷಗಳೇ ಬೇಕಾಗ್ಲಿಲ್ಲ!



ಪ್ರೊಜೆಕ್ಷನ್ ಬೂತಿನ ಕಡೆ ನೆಟ್ಟ ಪುಟ್ಟ ಕಂಗಳು ನಿರ್ದೇಶಕನಾಗಿ ಹೆಸರು ಮಾಡಿ ಮತ್ತೆ ಊರಿಗೆ ಮರಳುವ ವರೆಗೆ ಕಾಣುವುದು, ಕಾಣಿಸುವುದು ಏನೇನೆಲ್ಲ!


ಪುಟ್ಟ ಊರಿನಲ್ಲಿ ಆ ಚಿತ್ರಮಂದಿರ ಒಟ್ಟುಮಾಡುವ ಆ ಚಿಕ್ಕ ಚಿಕ್ಕ ಖುಷಿಗಳಿಗೆ, ಸೆನ್ಸಾರ್ ಸೆಶನ್ನುಗಳಲ್ಲಿ ಪರದೆಯ ಮಧ್ಯೆ ತೂಗುದೀಪಗಳಾಗೋ ಆ ಪುಟ್ಟ ಕಂಗಳಿಗೆ, ಕತ್ತರಿ ಬಿದ್ದಾಗಲೆಲ್ಲ ಅರಳುವ ಆ ತುಂಟ ನಗುಗಳಿಗೆ, ಎದ್ದು ಬಿದ್ದು ಸಿನೆಮಾ ನೋಡುವ ಆ ಮುದ್ದು ಹುಚ್ಚಿಗೆ, ಆ ಔಟ್ ಡೋರ್ ಪ್ರದರ್ಶನಗಳ ಐದಿಯಾಗಳಿಗೆ(ನನ್ನ ಅಚ್ಚುಮೆಚ್ಚಿನ ದೃಶ್ಯ!), ನಿದ್ರೆಗೆಟ್ಟು ಕಿಟಕಿಯಾಚೆ ಕಾಯುವ ಆ ಮುಗ್ಧ ಪ್ರೀತಿಗೆ... ಸ್ನೇಹದ ಆ ಕೊನೆಯ ಉಡುಗೊರೆಗೆ...

ಕುತೂಹಲ ಆಸಕ್ತಿಯಾಗಿ, ಆಸಕ್ತಿ ಪ್ರಯೋಗಕ್ಕಿಳಿದು, ಅದು ಸಫಲವಾಗಿ ಮನ್ನಣೆ ಪಡೆಯುವಲ್ಲಿ ದಾಟಿಹೋದ ಬದುಕು, ಪುಟ್ಟ ಊರಿನಲ್ಲಿ ಚಲನಚಿತ್ರದಂಥ ಮಾಧ್ಯಮ ಬೆಸೆಯುವ ಬಂಧಗಳು, ಅದರ ಅವಶ್ಯಕತೆ, ಹಳೆಯ ಚಿತ್ರ ಪ್ರದರ್ಶನ ತಂತ್ರಗಳು, ಅವುಗಳ ಓಲ್ಡ್ ವರ್ಲ್ಡ್ ಚಾರ್ಮ್...
ಹಿಂದೆ ಬರಲಾಗದ ದಾರಿಗಳು, ಮುಂದೆ ಹೋಗಿಯೂ ಹಿಂದೆ ನಿಂತ ಮನಸುಗಳು...
ಇತಿಹಾಸ, ಕಲೆ, ಬದುಕು, growing up, ಪ್ರಗತಿ, ಪ್ರೀತಿ - ಪ್ರೇರಣೆ - ಸಾಧನೆಗಳ ವಿಚಿತ್ರ ಬಂಧಗಳು...

ಇವೆಲ್ಲಕ್ಕೂ, ನೋಡಬೇಕಾದ ಚಿತ್ರ ಸಿನೆಮಾ ಪ್ಯಾರಡೀಸೋ.

ಅವಾರ್ಡುಗಳ ಸರಮಾಲೆ ಹೊತ್ತರೂ, ಸಬ್ ಟೈಟಲ್ ಇಲ್ಲದ ಸಿನೆಮಾ ಅಂದ್ರೆ ಕಾಮೆಡಿ ಷೋ ಆಗಿಬಿಡುವ ನನ್ನಂಥವಳ ಕಣ್ಣು ಸುಲಭವಾಗಿ ತಪ್ಪಿಸಿದ್ದ Giuseppe Tornatore ಈ ಇಟಾಲಿಯನ್ ಸಿನೆಮಾವನ್ನು ನೀ ನೋಡಲೇಬೇಕು ಅಂದ ಗೆಳೆಯನಿಗೆ,
ಥ್ಯಾಂಕ್ಯೂ...Toto!

Sunday, March 16, 2008

ಕನ್ನಡ ಜಾಲಿಗರ ಮೀಟ್‌ - ಒಂದಷ್ಟು ಮೆಲುಕು

ಬ್ಲಾಗರ್ಸ್ ಮೀಟ್ ಬಗ್ಗೆ ಇ-ಮೈಲ್ ಗಳು, ಪೋಸ್ಟ್‌ಗಳು ಹಾರಾಡಿ ಇಲ್ಲೀವರೆಗೆ ಯುಆರೆಲ್ ಅಷ್ಟೆ ಆಗಿದ್ದವ್ರೆಲ್ಲರನ್ನ ಒಂದುಕಡೆ ಭೇಟಿಯಾಗೋ ಸಂಭ್ರಮ, excitementಗಳು ತುಳುಕಾಡಿ ಅಂತೂ ಇವತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌‍ನಲ್ಲಿ ಎಲ್ಲ ಸೇರುವಂತಾಯ್ತು. ನಾಲ್ಕಕ್ಕೆ ಕಾರ್ಯಕ್ರಮ ಅಂತ ಕಾಲು ಘಂಟೆ ಮುಂಚೆನೇ ಹೋಗಿ ಸೇರಿದವಳಿಗೆ ಇವರ್ ಬಿಟ್ಟ್ ಅವರ್ ಬಿಟ್ಟ್ ಇವರ್ ಬಿಟ್ಟು ಅವರ್ ಬಿಟ್ಟ್ ಇವರ್ಯಾರು ಅಂತ ತೆರೆದ ಕಣ್ಣಲ್ಲೇ ಗೆಸ್ಸಿಂಗ್ ಗೇಮ್‌ ಷುರು ಆಗಿತ್ತು. ಕಡೇ ಪಕ್ಷ ಈ ಮೀಟಿಗೆ ಆಹ್ವಾನ ಕಳಿಸಿದ್ದವರನ್ನಾದ್ರೂ ಸರಿಯಾಗಿ ಗುರುತಿಸಬೇಕು ಅಂತ ಆರ್ಕುಟ್ ಆಲ್ಬಂಗಳಿಗೆ ಭೇಟಿ ಕೊಟ್ಟಿದ್ರೂ ಕೊನೆಗೆ ಸಹಾಯಕ್ಕೆ ಬಂದದ್ದು ಯುಆರ್‌ಎಲ್‌ಗಳೇ!:)) ಯಾರಿರಬಹುದು ಅಂತ ಗೆಸ್ ಮಾಡ್ತಾ, ಪರಿಚಯ ಮಾಡಿಕೊಳ್ತಾ, ಮಾಡಿಸ್ತಾ...ನಾಕೂವರೆ ಸುಮಾರಿಗೆ ಕಾರ್ಯಕ್ರಮ ಷುರುವಾಯ್ತು. ಕಾರ್ಯಕ್ರಮದ ವರದಿ ಇಲ್ಲಿ ಮಾಡೋ ಸಾಹಸಕ್ಕೆ ಹೋಗಲ್ಲ, ಅದು ನಿಮಗೆ ಬೇರೆ ಕಡೆಯೂ ಸಿಗುತ್ತೆ ಅನ್ನೋ ನಂಬಿಕೆಯೂ ಇರೋದ್ರಿಂದ!:) ಕಾರ್ಯಕ್ರಮಕ್ಕೆ ನನ್ನ ಪ್ರತಿಕ್ರಿಯೆಗಳು, ನನ್ನಲ್ಲಿ ಎದ್ದ ಕೆಲವು ಪ್ರಶ್ನೆಗಳು, ಒಂದಿಷ್ಟು ಖುಷಿ - ಇವುಗಳು ಈಗ ಇಲ್ಲಿ ನಿಮಗಾಗಿ.

ಮೊದಲನೇದಾಗಿ ಅಷ್ಟು ಜನ ಕನ್ನಡ ಬ್ಲಾಗರ್ಸ್ ಒಟ್ಟು ಸೇರಿದ್ದೇ ತುಂಬಾ ಖುಷಿ ಕೊಟ್ಟ ವಿಷ್ಯ. ಅದಕ್ಕೆ ಪ್ರಣತಿಗೆ ಮೊದಲ ಥ್ಯಾಂಕ್ಸ್! ಅಂತರ್ಜಾಲದಲ್ಲಿ ಕನ್ನಡ ಬೆಳೆಸೋ ಪ್ರಯತ್ನ ಮಾಡ್ತಿರೋ ಅನುಭವಿಗಳನ್ನ ಕರೆಸಿ ಮಾತಾಡ್ಸಿದ್ದು apt ಅನ್ನಿಸ್ತು. ಕಾರ್ಯಕ್ರಮದ ಮೊದಲಿನ ಭಾಗದಲ್ಲಿ ಸುಮಾರು ಪಾಲು ತಾಂತ್ರಿಕ ಸಮಸ್ಯೆ-ಸವಾಲುಗಳ ಚರ್ಚೆಗೇ ಹೊರಟುಹೋಯಿತು, ಅವೆಲ್ಲಾ ನನಗಂತೂ ಓವರ್‌ಹೆಡ್ ಟ್ರಾನ್ಸ್‌ಮಿಶನ್ ಆಯ್ತು ಅನ್ನೋದು ಬೇರೆ ಹೇಳಬೇಕಿಲ್ಲ! ಸಂಪದದ ಹರಿಪ್ರಸಾದ್ ನಾಡಿಗರು ಹೇಳಿದ್ದು ಇದ್ದಿದ್ರಲ್ಲಿ ಸ್ವಲ್ಪ ಅರ್ಥವಾಯ್ತು. ಸರಳವಾಗಿ, ನೇರವಾಗಿ ಹೇಳಿದ್ರು. ಇನ್ನೊಂದ್ ಸ್ವಲ್ಪ ನಿಧಾನಕ್ಕೆ ಮಾತಾಡಬಹುದಿತ್ತು ಅನ್ನಿಸ್ತು. ಬರೀ ಭಾವಲಹರಿಗಳಲ್ಲದೇ ಬೇರೆ ಬೇರೆ ವಿಷಯಗಳ ಬಗ್ಗೆನೂ ಕನ್ನಡದಲ್ಲಿ ಬ್ಲಾಗಿಸೋ ಅವಶ್ಯಕತೆ, ಸಾಧ್ಯತೆಗಳ ಬಗ್ಗೆ ಕೆಂಡಸಂಪಿಗೆಯ ರಷೀದರು, ದಟ್ಸ್‌ಕನ್ನಡದ ಶ್ಯಾಮಸುಂದರ್‍ಅವರು ಹೇಳಿದ್ರು. ಈಚೆಗೆ ಹುಲುಸಾಗಿ ಬೆಳೀತಿರೋ ಬ್ಲಾಗ್‌ಗಳನ್ನ ಓದ್ತಾ ಈ ಮಾತು ನನ್ನ ಮನಸ್ಸಿಗೂ ಬಂದಿತ್ತು. ಅದಕ್ಕೇ ಹೀಗೇಸುಮ್ಮ್ನೆಇಲ್ಲಿ ಬರೆಯೋದರ ಜೊತೆಗೆ ಸಂಗೀತಕ್ಕಾಗಿ sree-raaga.blogspot.com ಷುರು ಮಾಡಿದ್ದೆ. ಆದ್ರೆ ಹಾಗಂತ ಭಾವಲಹರಿಗಳಿಗೆ ಬೆಲೆಯಿಲ್ಲ ಅಂತಲ್ಲ. ಕಂಪ್ಯೂಟರ್ ಜನಾಂಗಕ್ಕೆ ಕನ್ನಡ ಹತ್ತಿರವಾಗಿಸೋದ್ರಲ್ಲಿ, ನಾವೂ ಕನ್ನಡ ಓದ್ತೀವಿ-ಬರೀತೀವಿ ಅನ್ನೋ ಅಭಿಮಾನ ಹುಟ್ಟಿಸೋದ್ರಲ್ಲಿ ಭಾವಲಹರಿಗಳ ಪಾತ್ರ ಅದನ್ನ ದಾಟಬೇಕಾದ ಅವಶ್ಯಕತೆಯಷ್ಟೇ ದೊಡ್ದದು ಅನ್ನಿಸುತ್ತೆ.

ಇದೇ ವಿಷ್ಯಕ್ಕೆ ಸಂಬಂಧ ಪಟ್ಟಹಾಗೆ ಶ್ಯಾಮ್‌ಸುಂದರ್ ಅವ್ರು ಹೇಳಿದ್ದ್ ಇನ್ನೊಂದು ಮಾತು - ಬ್ಲಾಗರ್ಸ್ ಜವಾಬ್ದಾರಿಯ ಬಗ್ಗೆ. ನನಗೇನ್ ಬೇಕೋ ಬರೀತೀನಿ, ನಿಂಗೆ ಇಷ್ಟ ಇದ್ದ್ರೆ ಓದು, ಕಷ್ಟವಾದ್ರೆ ಬಿಡು ಅನ್ನೋ ಧೋರಣೆ ತಪ್ಪು ಅಂದ್ರು. ಅದು ಸರೀನೇ... ಆದ್ರೆ ಬ್ಲಾಗ್ ಷುರುಮಾಡಿದ್ ಹೊಸದ್ರಲ್ಲಿ ನನಗೂ ಆ ಧೋರಣೆ ಇದ್ದದ್ದು ಸುಳ್ಳಲ್ಲ. ಆ ಬಗ್ಗೆ ತಿಳಿಯದೇ ಕನ್ನಡಸಾಹಿತ್ಯ.ಕಾಂನ ಶೇಖರ್‌ಪೂರ್ಣ‌ಅವರ ಜೊತೆ ವಾದಕ್ಕೂ ಇಳಿದಿದ್ದೆ! ಈಗ ಭಾರೀ ಜವಾಬ್ದಾರಿಯುತವಾಗಿ ಬರೀತೀನಿ ಅಂತಲ್ಲ. ಆದ್ರೆ ಕಡೇಪಕ್ಷ ಹಾಗೆ ಬರೀತಿಲ್ಲ ಅನ್ನೋ ಅರಿವು, ಅದರ ಬಗ್ಗೆ ಸ್ವಲ್ಪ guilt, ಚೆನ್ನಾಗಿ, ಅರ್ಥಪೂರ್ಣವಾಗಿ ಏನಾದ್ರೂ ಬರೀಬೇಕನ್ನೋ ಹಂಬಲ ಇದೆ ಅನ್ನಬಹುದು. ಇಷ್ಟು ಅನ್ನಿಸೋಕೆ ತಲೆಯಮೇಲೆ ಯಾವ ಬೋಧಿವೃಕ್ಷವೂ ಬೆಳೀಲಿಲ್ಲ, ೨ ವರ್ಷ ಹೀಗೇಸುಮ್ಮ್ನೆ ಕುಟ್ಟಿ ಉಳಿದ ಬ್ಲಾಗಿಗರ ಜೊತೆ interact ಮಾಡ್ತಾ, ಅವರು ಬರೆದದ್ದು ಓದ್ತಾ ಬಂದ ಅನುಭವ ಸಾಕಾಯ್ತು. ಒಂದಷ್ಟು introspection ಮಾಡಿಕೊಂಡ ಎಲ್ಲ ಬ್ಲಾಗಿಗರೂ ಹೀಗೆ ಅನುಭವದ ಘಟ್ಟಗಳನ್ನ ಹಾದುಹೋಗ್ತಾರೆ, ಹೀಗೇ ಬರೀತಾ ಹೋದ ಹಾಗೆ introspection ನಮ್ಮೊಳಗಿಂದ್ಲೇ ಅವಶ್ಯಕತೆಯಾಗಿ ಬರುತ್ತೆ ಅನ್ನಿಸುತ್ತೆ. ಯಾರಾದ್ರೂ ಸ್ವಲ್ಪದೊಡ್ಡವರು-ಅನುಭವಿಗಳು ನಮ್ಮ ಬರಹಗಳನ್ನ ಓದಿ, ನಮ್ಮ ಭಂಡಧೈರ್ಯಗಳಿಗೆ ನಾಕು ಪ್ರಶ್ನೆಗಳನ್ನಿಟ್ಟರೆ ಈ introspection ಇನ್ನಷ್ಟು ಸುಲಭವಾಗುತ್ತೆ. ಜೊತೆಗೆ ಸ್ವಲ್ಪ guidence ಕೂಡ ಸಿಕ್ಕರೆ ಗಟ್ಟಿಯೂ ಆಗ್ತೀವೆನೋ, ಒಳ್ಳೇ ಬರಹಗಾರರಲ್ಲದಿದ್ರೂ ಒಳ್ಳೆಯ ಓದುಗರಾಗಿಯಾದ್ರೂ...

ಅದೇನೇ ಇದ್ದರೂ ಯಾವ ಪಬ್ಲಿಶರ್ ಹಂಗಿಲ್ಲದೇ ನಾಕುಜನ ಓದುಗರನ್ನ ಗಿಟ್ಟಿಸಿಕೊಳ್ಳೋದರಿಂದ ನಮ್ಮಲ್ಲಿ ಒಂದುರೀತಿಯಲ್ಲಿ natural bratತನ ಇದ್ದೇ ಇರುತ್ತೆ, ಅದರಿಂದ ಬ್ಲಾಗ್ ಬರಹಗಳಿಗೇ ಒಂದು ವಿಶಿಷ್ಟ ಫ್ಲೇವರ್ ಕೂಡ ಇರುತ್ತೆ. ಅದು ತೀರಾ ಬೇಜವಾಬ್ದಾರಿತನವಾಗದೇ ಹೋಗೋದಕ್ಕೆ ಸ್ವಲ್ಪ ಎಚ್ಚರವಹಿಸಬೇಕಷ್ಟೆ. ಸಂವಾದ, ಬೇರೆ ಬರಹಗಳ ಓದು ಇದಕ್ಕೆ ಸಹಾಯವಾಗುತ್ತೆ ಅಂತ ನನಗನ್ನಿಸೋದು... ನಮ್ಮ-ನಮ್ಮ ನಡುವಿನ ಮಾತುಗಳು ಬೆಳೀಬೇಕು ಅನ್ನೋದಕ್ಕೆ, ಇವತ್ತಿನ ಮೀಟ್‌ನಂಥದ್ದರ ಅವಶ್ಯಕತೆಗೆ ಇನ್ನೊಂದು ಕಾರಣ...

ಬ್ಲಾಗಿಂಗ್ ಅನುಭವದ ಬಗ್ಗೆ ಮಾತಾಡಿದವ್ರಿಗೆ ಇನ್ನೊಂದೆರಡು ನಿಮಿಷ ಪ್ರಿಪರೇಷನ್ ಸಮಯ ಸಿಕ್ಕಿದ್ರೆ ಸ್ವಲ್ಪ ಫೋಕಸ್ಡ್ ಆಗಿ ಮಾತಾಡೋಕೆ ಸಾಧ್ಯವಾಗ್ತಿತ್ತೇನೋ ಅನ್ನಿಸ್ತು. ’ಚೆನ್ನಾಗಿದೆ’ ಅನ್ನೋದರಿಂದ ಮುಂದೆ ಹೋಗಿ ವಿಮರ್ಶೆಯೂ ಬರಬೇಕು ಅನ್ನೋ ಸುಧನ್ವ ದೇರಾಜೆಯವರ ಮಾತು ನಮ್ಮ ನಮ್ಮಲ್ಲಿ ಇನ್ನಷ್ಟು ಮಾತು-ಕತೆಯ ಅವಶ್ಯಕತೆಯನ್ನ ತೋರಿಸ್ತು ಅನ್ನಿಸುತ್ತೆ. ಈ ರೀತಿಯ ಹೀಗೇ ಸುಮ್ಮನೆ ಚೆನ್ನಾಗಿದೆ ಅನ್ನೋ ಕಾಮೆಂಟುಗಳಿಗೂ ಅವುಗಳದ್ದೇ ಬೆಲೆ ಇದೆ, ಬರೆಯುವವರ ಹುಮ್ಮಸ್ಸಿಗೆ ನೀರೆರೆಯೋದರಲ್ಲಿ. ಆದರೆ ಪ್ರಕಟಿತ ಸಾಹಿತ್ಯಕ್ಕೆ ಸಿಗುವಷ್ಟು ವಿಮರ್ಶೆಯ ಮರ್ಯಾದೆ ಸಿಗದಿರೋದಕ್ಕೆ ಇದು ಬಹುಮಟ್ಟಿಗೆ ’ಹೀಗೆ ಸುಮ್ಮನೆ’ ಬರಿಯೋ-ಓದೋ ಮೀಡಿಯಮ್ ಆಗಿರೋದು ಕಾರಣವೇನೋ. ರೀಡಿಂಗ್ ಕ್ಲಬ್ ಆಗಿಯೋ ಮೈಲ್ ಗ್ರೂಪ್ ಆಗಿಯೋ ಬರೆದದ್ದನ್ನು ಚರ್ಚಿಸಲು ಒಂದು ಮಾಧ್ಯಮ ಹುಡುಕಿಕೊಳ್ಳಬೇಕಾದ ಅಗತ್ಯ ಇದೆ ಅನ್ನಿಸುತ್ತೆ, ಕಾಮೆಂಟ್‌ಗಳ ಮೂಲಕವೇ ಇದು ಸಾಧ್ಯವಾಗೋದು ಅಷ್ಟು ಸುಲಭವಲ್ಲವೇನೋ ಅನ್ನಿಸುತ್ತೆ. ಯಾಕಂದ್ರೆ ಬ್ಲಾಗ್ ಓದೋದು, ಕಾಮೆಂಟಿಸೋದು ಎಲ್ಲಾ ಕ್ಯಾಶುವಲ್ಲಾಗಿ, ಯಾವಾಗ್ಲೋ ಸಿಕ್ಕ ಎರಡು ನಿಮಿಷದ ಬ್ರೇಕ್‌ನಲ್ಲೂ ನಡೆದುಹೋಗ್ತಿರುತ್ತೆ. ಫೋಕಸ್ಡ್ ಪ್ರತಿಕ್ರಿಯೆ-ಚರ್ಚೆಗಳಿಗೆ ಅದಕ್ಕೇ ಆದ ಒಂದು ಸ್ಥಾನ ಕಲ್ಪಿಸದೇ ಇದು ಸಾಧ್ಯವಾಗಲ್ಲ. ಕನ್ನಡ ಬ್ಲಾಗ್‌ಗಳ ಸಂಖ್ಯೆಯ ಜೊತೆ ವ್ಯಾಪ್ತಿಯೂ ಬೆಳೀತಿರೋ ಕಾಲದಲ್ಲಿ ಅವುಗಳನ್ನ ಪೋಷಿಸೋದಕ್ಕೆ ಈ ರೀತಿಯ ಸಪೋರ್ಟ್ ಸಿಸ್ಟಂ ಹುಟ್ಟೋ ಅವಶ್ಯಕತೆ ಇದೆ ಅನ್ನಿಸುತ್ತೆ. ಇವತ್ತಿನ ಮೀಟ್ ಈ ಬಗೆಯ ಸಂವಾದಗಳಿಗೆ ಒಂದು ಒಳ್ಳೆಯ ಪ್ರಾರಂಭ ಅನ್ನಿಸುತ್ತೆ.

ಚಹಾ ವಿರಾಮದಲ್ಲಿ ಜಯಾ ಹೇಳಿದಂತೆ ಸ್ವಲ್ಪ preachy ಅನ್ನಿಸಿದ್ರೂ ಚಿಂತನೆಗೆ ಹಚ್ಚೋ ಹಲವು ವಿಷ್ಯಗಳು ಕಾರ್ಯಕ್ರಮದಲ್ಲಿದ್ದ್ವು ಅನ್ನೋದು ನಿಜ. ಮೊದಲ ಪ್ರಯತ್ನವಾಗಿ ಕಾರ್ಯಕ್ರಮ ತುಂಬಾ ಯಶಸ್ವಿ ಅನ್ನಿಸ್ತು. ನಮ್ಮ ನಡುವೆ ಇನ್ನೊಂದಿಷ್ಟು interactionಗೆ ಅವಕಾಶ, ಕಂಟೆಂಟ್ ಬಗ್ಗೆ ಇನ್ನೊಂದಿಷ್ಟು ಗಮನ ಇದ್ದಿದ್ದರೆ... ಇರುತ್ತೆ, ಮುಂದಿನ ಪ್ರಯತ್ನದಲ್ಲಿ, ಅನ್ನಿಸುತ್ತೆ.

ಒಟ್ಟ್ನಲ್ಲಿ ಹಲವು ದಿನಗಳಿಂದ ಒಬ್ಬರದೊಬ್ಬರು ಬ್ಲಾಗ್ ಓದ್ತಾ, ಕಮೆಂಟಿಸ್ತಾ ಇದ್ದ ಹಲವು ಗೆಳೆಯರನ್ನ ಮೊದಲಬಾರಿ ಮುಖತಃ ಭೇಟಿ ಮಾಡಿದ್ದು ತುಂಬಾ ಖುಷಿಯಾಯ್ತು! ಶ್ರೀ, ಸುರೇಖಾ(ಮನಸ್ವಿನಿ), ಸಿಂಧು, ಶ್ರೀನಿಧಿ, ಸುಶ್ರುತ, ರಾಧಾಕೃಷ್ಣ, ಅರವಿಂದ್ ನಾವಡ, ಶಿವಕುಮಾರ್, ಗುರುರಾಜ್... ಅಲ್ಲದೇ ಓದಿ ಚೆನ್ನಾಗಿ ಬರೀತಾರೆ ಅನ್ನಿಸಿದ್ದ ಹಲವು ಬ್ಲಾಗಿಗರನ್ನ ನೋಡಿದ್ದು, ಮಾತಾಡಿಸಿದ್ದು, ಹೊಸ ಪರಿಚಯಗಳಾಗಿದ್ದು... I guess everyone shares the feeling of wanting to take this forward. ಪ್ರಣತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು! ಮಾತಾಡೋಕೆ ಟೈಮ್ ಸಾಲಲಿಲ್ಲ, ಮುಂದಿನ ಭೇಟಿ ಬೇಗ ಆಗ್ಬೇಕು! ಈ ಸಲ ಬರದೇ ಮಿಸ್ಆದ್ ಬ್ಲಾಗಿಗರನ್ನೂ ಮುಂದಿನಸಲ ಮೀಟ್ ಮಾಡೋ ಹಾಗಾಗಬೇಕು!

ಅಂದಹಾಗೆ ಯಾವ ಮದುವೆಮನೆ ಹುಡುಗೀರ್‍‌ಗೂ ಹೆಚ್ಚಾಗಿ ಸಂಭ್ರಮ-ಸಡಗರಗಳಿಂದ ಓಡಾಡ್ತಿದ್ದ ನಮ್ಮ ಶ್ರೀನಿಧಿ-ಸುಶ್ರುತ ಹುಡುಗರ್ ಗುಂಪನ್ನ ನೋಡಿ ಭಾಳಾ ಖುಷಿಯಾಯ್ತು!

ತುಂಬಾ ಕೊರೆದುಬಿಟ್ಟೆ! ಏನ್ ಮಾಡೋದು, ಅಷ್ಟು ಜನ ಕುಟ್ಟಿಗರನ್ನ ಒಟ್ಟಿಗೇ ನೋಡಿದ್ದ್ ಎಫೆಕ್ಟು!:P ಸರಿ ಇನ್ನು ಮಿಕ್ಕ ವಿವರಗಳಿಗೆ ಬೇರೆ ಬ್ಲಾಗ್‌ಗಳನ್ನ ನೋಡಿ:) ಮತ್ತೆ ನನ್ನ ಕ್ಯಾಮರಾ ಚಾರ್ಜ್ ಮಾಡೊದ್ ಮರೆತಿದ್ರಿಂದ ಫೋಟೋಗಳಿಗೆ ಕಾಯಬೇಕು...ನೀವ್ ಯಾರಾದ್ರೂ ಕ್ಲಿಕ್ಕಿಸಿದ್ರೆ ಪ್ಲೀಸ್ ಕಳ್ಸಿ!:)

Thursday, March 08, 2007

ಹೀಗೇಸುಮ್ಮನೆ ಎದ್ದಿದ್ದಲ್ಲ! :)

ಇರುವುದೆಲ್ಲವ ಬಿಟ್ಟು ಇರದುದರೆಡೆ ನೋಡೋಕೆ ಹೊರಟವಳು ಹೀಗೇ ಸುಮ್ಮನಾಗಿದ್ದು ಯಾಕೆ ಅಂತ ನೀವೆಲ್ಲ ಕೇಳಿ, ತಿವಿದು ಸುಸ್ತಾಗಿಬಿಡ್ತೀರ ಅಂತ ನನ್ನ ಸೋಮಾರಿತನ ಹೇಳ್ತಿತ್ತು. ಆದ್ರೆ ಭಾಳಾ ಇದೀರ್ರೀ ನೀವೆಲ್ಲ! ಕೊನೆಗೂ ಈ ಮಹಿಷಾಸುರಿಯನ್ನ ಬಡಿದೆಬ್ಬಿಸೇ ಬಿಟ್ಟ್ರಿ! ಹಾ, ಹಾ, ತುಂಬಾ ಖುಷಿಯಾಗಿಬಿಡಬೇಡಿ, ಏಳು ಎದ್ದೇಳು ಅಂತ ನೀವೆಲ್ಲ ಬರೆದ ಇ ಮೈಲ್, ಸ್ಕ್ರ್ಯಾಪ್ ಗಳಿಂದ ನನ್ನ ಕುಂಭಕರ್ಣತನ(ಕುಂಭಕರ್ಣಿತನ ಅನ್ನಬೇಕೋ?;) )ಬಿಟ್ಟು ಓಡಿಹೋಗಿಬಿಡ್ತು ಅಂತ! ಹೌದು, ಅದೂ ಆಗೀಗ ಕಾಡ್ತಿದ್ದಿದ್ದು ನಿಜ ಆದ್ರೂ ಈ ಪುನರುತ್ಥಾನಕ್ಕೆ( ವಾಹ್ ವಾಹ್! :p) ಇನ್ನೊಂದು ವಿಶೇಷ ಕಾರಣ ಇದೆ!
ಓಹ್ ಹನ್ನೆರಡು ಹೊಡೆಯೋದಕ್ಕೆ ಮೊದಲು, ಮಹಿಳಾ ದಿನದ ಶುಭಾಶಯಗಳು!
ಏನು ಇದ್ದಕ್ಕಿದ್ದಂತೆ ಗೋಕುಲಾಷ್ಟಮಿಗೂ ಇಮಾಮ್ ಸಾಬರಿಗೂ ಸಂಬಂಧ ಕಲ್ಪಿಸ ಹೊರಟಿದಾಳಲ್ಲಾ, ಬರೀದೇ ಬರೀದೇ ಇವಳ ಕುಟ್ಟುಮಣೆ ದಿಕ್ಕುಗೆಟ್ಟಿರಬೇಕು ಅಂದುಕೊಂಡ್ರಾ? ಏನಪ್ಪಾ ಸ್ವಲ್ಪನೂ ತಾಳ್ಮೆ ಇಲ್ಲ ನಿಮ್ಗೆ!:p

ಕುಟ್ಟೋದಕ್ಕೆ ರೆಸ್ಟ್ ಕೊಟ್ಟಿದ್ರೂ ನಿಮ್ಮಗಳ ಕುಟ್ಟಂಬಲಗಳಿಗೆ ವಿಜಿಟ್ ಕೊಟ್ಟು ತಮ್ಮ ಪ್ರತಾಪಗಳನ್ನ ಕಂಡು ಧನ್ಯಳಾಗೋ ಪುಣ್ಯಕಾರ್ಯವನ್ನೇನೂ ನಾನು ನಿಲ್ಲಿಸಿರ್ಲಿಲ್ಲವಷ್ಟೆ, ಹೀಗಿರಲಾಗಿ ,ಇತ್ತೀಚೆಗೆ ಇಂತು ಕನ್ನಡ ಬ್ಲಾಗ್ ಭೂಮಿಯಲ್ಲಿ ಅಲೆದಾಡುತ್ತಿದ್ದ ನನ್ನ ಅಂತರಾತ್ಮಕ್ಕೆ ಹಿಂದೆಂದೂ ಕಂಡಿರದ ಅಪೂರ್ವವೊಂದು ಕಂಡು ಮನಸ್ಸು ಹಿಗ್ಗಿ ಹೀರೇಕಾಯಿಯಾಯಿತು! ಆ ಹೀರೇಕಾಯಿಯನ್ನ ಹೀಗೇ ಸುಮ್ಮನೆ ಬಿಟ್ಟುಬಿಡದೆ ಹಾಕಿ ಈಗ ಕೂಟು, ಹುಳಿತೊವ್ವೆಗಳನ್ನು ಮಾಡಬೇಕನ್ನೋ ಮಹದಾಕಾಂಕ್ಷೆ ಇರುವುದೆಲ್ಲ ಘನಕಾರ್ಯಗಳನ್ನು(?) ಬಿಟ್ಟು ಇಲ್ಲಿ ಬಂದು ಕುಟ್ಟೋದಕ್ಕೆ ಪ್ರೇರೇಪಿಸಿತು!

ಸಾಕಮ್ಮಾ ಪೀಠಿಕಾ ಪ್ರಕರಣ, ಚುಕ್ಕೆಗೆ ಬಾ* ಅನ್ನುತಿದೀರಾ? ಬಂದೆ ಬಂದೆ, ಬಂದೇಬಿಟ್ಟೆ:))
ಅಲ್ಲ, ಇಷ್ಟು ದಿನ ಕನ್ನಡದಲ್ಲಿ ಬ್ಲಾಗ್ ಗಳೆನೋ ಚೆನ್ನಾಗಿಯೇ ಬರುತ್ತಿತ್ತು...ಓದೋಕೂ ಖುಷಿಯಾಗ್ತಿತ್ತು, ಆದ್ರೆ ಎಲ್ಲೋ ಒಂದು ಕಡೆ ಏನಪ್ಪಾ ಒಬ್ಬಳೇ ಅಲೀತಿದೀನಿ ಈ ಗಂಡುಭೂಮಿನಲ್ಲಿ ಅಂತ ನನ್ನಂಥಾ 'ಗಂಡುಬೀರಿ'ಗೂ ಅನ್ನಿಸಿಬಿಡ್ತಿತ್ತು! ಮನಸ್ವಿನಿ ಬಿಟ್ಟರೆ ನನ್ನ ಕಣ್ಣಿಗೆ ಯಾವ ಕನ್ನಡತಿಯೂ ಕಂಡಿರಲಿಲ್ಲ ಅನ್ನಿಸುತ್ತೆ ಇಲ್ಲಿ... ಮೊನ್ನೆ ಸುಶ್ರುತರ ಮೌನಗಾಳದಿಂದ ಸಿಂಧು ಅವರ ಎಲ್ಲ ನೋಟಗಳಾಚೆಗೆ ಕಣ್ಣು ಹಾಯಿಸಿದೆ...ಕವನಗಳು ಓದಿಸಿಕೊಳ್ಳುತ್ತಾನೇ ಹೋದ್ವು! ನೊಂದ ಹೃದಯವೇ... , ಕೇಳಬಾರದಿತ್ತು...ಆದ್ರೂ,
ತಂಪಾಗಿ ಷುರುವಾಗಿ ಕೊನೆಯಲ್ಲೆಲ್ಲೋ ಮೆಲ್ಲಗೊಂದು ಪ್ರಶ್ನೆ ಇಡುವ ಸುಪರ್ಣಾ ನದಿಯ ತೀರದಲ್ಲೊಂದು ಸಂಜೆ...

ಅಲ್ಲಿಂದ ಮನಸ್ಸನ್ನ ಮಾತಾಡಿಸುತ್ತಿರೋ ಶ್ರೀ (ಹೀಗೇ ಸುಮ್ಮನೆ ಇಲ್ಲಿ ಬಂದು ಕೂತಿರೋ ನಾನಲ್ಲಪಾ!:)) ) ಮನೆಗೊಂದು ಭೇಟಿ...ಕನಸು -ನನಸುಗಳ ಕನವರಿಕೆಗಳು, ಪುಟ್ಟ ಪುಟ್ಟ ಹರಟೆಗಳು, ಎಲ್ಲಕ್ಕಿಂತ ಹಿಡಿಸಿದ್ದು ಪುಟ್ಟ ಕವನ - ಮನಸು ಏಕಾಂಗಿಯಾದಾಗ...

ಯಾವುದೇ ದಿನಾಚರಣೆಗಳಿಗೆ ಅಂಥದ್ದೇನೂ ಮಹತ್ವ ಕೊಡೋದಿಲ್ಲ ನಾನು. ಹಾಗೆ ಮಹಿಳಾ ದಿನಕ್ಕೆ ಸರಿಯಾಗೆ ನನ್ನ ಕಣ್ಣಿಗೆ ಎರಡು ಕನ್ನಡತಿ ಬ್ಲಾಗ್ ಗಳು ಬಿದ್ದಿದ್ದು, ಅವು ಕಣ್ಣಿಗೇ ನಿಲ್ಲದೆ ಇದೇ ಸಮಯಕ್ಕೆ ಸರಿಯಾಗಿ ಹೃದಯಕ್ಕೂ ಧಾಳಿಯಿಟ್ಟಿದ್ದು ಕಾಕತಾಳೀಯ. ಆದ್ರೆ ಆ ಖುಷಿಯಲ್ಲಿ ನಾನು ನನ್ನ ಇಷ್ಟು ದಿನದ ನಿದ್ದೆ ಸ್ವಪ್ರೇರಣೆಯಿಂದ ಬಿಟ್ಟಿದ್ದು, ಈ ಅಪರಾತ್ರಿಯಲ್ಲಿ ಇಷ್ಟುದ್ದ ಕೊರೀತಾ ಕೂತಿರೋದು ಜಗತ್ತಿನ ವಿಸ್ಮಯಗಳ ಪಟ್ಟಿಗೆ ಸೇರಬೇಕಂತ ನನ್ನ ನಿದ್ರಾಮಹಾತ್ಮೆಯನ್ನ ಬಲ್ಲವರೆಲ್ಲ ಕ್ಯಾಂಪೇನ್ ಮಾಡೋದಂತೂ ಖಂಡಿತ! ;D

P.S,: ಈಗಷ್ಟೇ ಈ ಮಂಕುತಲೆಗೆ ಫ್ಲ್ಯಾಷ್ ಆದ ಇನ್ನೊಂದು ಕಾಕತಾಳೀಯ ವಿಷ್ಯ - ಸಿಂಧು, ಶ್ರೀ ಎರಡೂ ನನ್ನವೇ ಹೆಸರುಗಳಾಗಿರೋದು!! (ಸಿಂಧು ನನ್ನ 'ಪೆಟ್ ನೇಮ್'!)

(ಸಿಂಧು ಹಾಗೂ ಶ್ರೀ ಇಬ್ಬರೂ ನನ್ನ ಕಣ್ಣಿಗೆ ಬಿದ್ದಿದ್ದು ಈಗ ಅಷ್ಟೆ. ಶ್ರೀ ಮೇ ೨೦೦೬ರಿಂದ, ಸಿಂಧು ಡಿಸೆಂಬರ್ ೨೦೦೬ರಿಂದ ಕುಟ್ಟುತ್ತಿದಾರೆ ಅನ್ನುತ್ತೆ ಬ್ಲಾಗರ್)
*ಚುಕ್ಕೆಗೆ ಬಾ = come to the point! translation courtesy a friend of mine who thinks he cracks a joke everytime he opens his mouth!:))

Sunday, July 02, 2006

ಚಿನಕುರುಳಿ ಪಟಾಕಿ!

ಪ್ರ: "ಅವ್ಳು ನಿನಗೇನಾಗ್ಬೇಕು?"
ಉ: "ಅಕ್ಕ ಆಗ್ಬೇಕು"
(ಎರಡು ಸೆಕೆಂಡ್ ಮೌನ)
"ಆದ್ರೆ ನಾನು ಅವ್ಳಿಗೆ ಏನೂ ಆಗಲ್ಲ!"

ಮೂರು ವರ್ಷದ ಮುದ್ದಿನ ಮುದ್ದೆಯ ಬಾಯಲ್ಲಿ ಈ ಮಾತು ಕೇಳಿ ಒಂದ್ ನಿಮಿಷ ಹಾಗೇ ಶಾಕ್ ಆಗಿ ಕೂತ್ವಿ ನಾವು!
ಹಾಗೇ ಈ ಮಾತನ್ನ ಮೆಲುಕು ಹಾಕ್ತಿದ್ದಾಗ ಭಾಷೆ, ಬಾಂಧವ್ಯಗಳೆರಡಕ್ಕೂ ನಮ್ಮ ಚಿನ್ನುಮರಿ ಕೊಡೋ ಪ್ರಾಮುಖ್ಯ ನಾವು ಕೊಡಲ್ಲ ಅನ್ನೋ ಸತ್ಯ flash ಆಗಿ ಆ ಪುಟ್ಟಿಯ ಪ್ರಪಂಚಕ್ಕೂ ನಮ್ಮದಕ್ಕೂ ಇರೋ ಕಂದಕವನ್ನ ಎತ್ತಿ ತೋರ್‍ಸ್ಬಿಡ್ತು!


ಆಡೋ ಮಾತಿಗೂ ಮಿಡಿಯೋ ಹೃದಯಕ್ಕೂ ಇರೋ ಲಿಂಕ್ ಗಳನ್ನೆಲ್ಲ ಗುಜರಿ ಅಂಗಡಿ ಪಾಲು ಮಾಡಿಬಿಡ್ತೀವಾ ಬೆಳೀತಾ ಬೆಳೀತಾ... ಹಾಗಿದ್ದ್ರೆ ಅದು ಬೆಳೆಯೋದು ಹೇಗಾಯ್ತು...ಅಕ್ಕ ಅನ್ನೋ ಅಕ್ಕರೆ ಇದೆಯೋ ಇಲ್ಲ್ವೋ, ಬಾಯಿ ಅದರ ಪಾಡಿಗೆ ಅದು ಅಭ್ಯಾಸಬಲದ್ ಮೇಲೆ ಕೆಲಸ ಮಾಡುತ್ತಾ... ಅಥವಾ ಮಾತಿಗೂ ಮನಸ್ಸಿಗೂ ಮಧ್ಯ ಇರೋ ಅಂತರವನ್ನ ಅಳೀಸೋ ಧಾರ್ಷ್ಟ್ಯ ವಯಸ್ಸಾದ್ ಹಾಗೇ ಕರಗಿ ಬಿಡುತ್ತಾ...
ಎಲ್ಲವೂ taken for granted ಆಗಿ ಇವಕ್ಕೆಲ್ಲ ಅರ್ಥವೇ ಕಳೆದುಹೋಗುತ್ತಾ ನಮ್ಮ್ ಬದುಕಿನಲ್ಲಿ...ಅರ್ಥ ಹುಡುಕಿ ಕೂರೋ ವ್ಯವಧಾನದ ಕೊರತೆನೋ...

ಹೀಗೇ ಕಣ್ಣಿಗೆ ಪಟ್ಟಿ ಕಟ್ಟ್ಕೊಂಡು ರೇಸ್ ಓಡ್ತಿರೋ ನಮಗೆ ಒಂದು ಕ್ಷಣ ಬೆಚ್ಚಿ ಕಣ್ಣಗಲಿಸೋ ಹಾಗೆ ಶಾಕ್ ಕೊಡೋಕೆ ಈ ಪುಟ್ಟಿ ಇದಾಳಲ್ಲ ಅಂತ ಅಲ್ಲೇ ಒಂದು ಪುಟ್ಟ ಸಮಾಧಾನ ಮಾಡ್ಕೊಂಡಿದ್ದೂ ಆಯ್ತು!

ಪುಟ್ಟಕ್ಕನ ಪಾರ್ಟಿಂಗ್ ಶಾಟ್:
ನಮ್ಮ ಭಾವ (ಅವಳ ತಂದೆ) ಅವಳನ್ನ್ ಕೇಳಿದ್ರು, "ಸೋನು, ನಿಂಗೆ 'B' ಬರಿಯೋಕೆ ಬರುತ್ತಾ?"
ಅವಳ ಬತ್ತಳಿಕೆಯಲ್ಲಿ ಅದಕ್ಕೂ ಉತ್ತರ ರೆಡಿ! - "ನಂಗೆ 'B' ಬರ್ಯೋಕೆ ಬರಲ್ಲ, 'B' ಮೇಲೆ ಕೂತ್ಕೊಳ್ಳೋಕೆ ಬರುತ್ತೆ!"(ಪಾರ್ಕಿನಲ್ಲಿ ಮಕ್ಕಳ ಆಟಕ್ಕೆ A, B, C etc ಹಾಕಿರ್ತಾರಲ್ಲ - ಅದರ ಬಗ್ಗೆ ಸೋನು ಕೊಚ್ಚಿಕೊಂಡಿದ್ದು!:))

Sunday, April 23, 2006

ಗುನುಗುತ್ತಿರೋ ನಾಕು ಸಾಲುಗಳು, ಅಣ್ಣಾವ್ರು....ಹೀಗೇ...

ಸಾವಿರ ದಾಟಿ ಇನ್ನೇನು ತಿಂಗಳಾಗುತ್ತೆ...ಬರೆದು ಹಾಕೋ ವಿಷಯಗಳು ನೂರಿವೆ ತಲೆಯಲ್ಲಿ...ಇವತ್ತೆಷ್ಟು ಬರಿಯಬಲ್ಲೆ ಗೊತ್ತಿಲ್ಲ. ನಿದ್ದೆ ಕಣ್ಣುತುಂಬೋ ಮೊದಲು ಇವತ್ತು ಕೇಳಿದ ಕೆಲವು ಹಾಡುಗಳನ್ನ ಮೆಲುಕು ಹಾಕ್ತಾ ಇದೆ ಮನಸ್ಸು. ನಾಕು ಸಾಲು ಗೀಚಿಬಿಡ್ತೀನಿ...ಒಳ್ಳೆ ಹಾಡುಗಳು, ನನಗೇ ನಾಳೆ ಮರೆತಾಗ ಇಲ್ಲಿ ಬಂದು ಓದಿಕೊಳ್ಳೋಕಾಗುತ್ತೆ!

ವ್ಯಾಸರಾಯರ ಕವನ ಇ-ಟಿವಿಯಲ್ಲಿ ಎದೆ ತುಂಬಿ ಹಾಡಿದೆನು'ನಲ್ಲಿ ಸೊಗಸಾಗಿ ಹಾಡಿದ್ರು ಶಿವಮೊಗ್ಗದವ್ರೊಬ್ಬ್ರು. ಆಹ್! ಒಳ್ಳೆ ಗಝಲ್ ಧಾಟಿಯಲ್ಲಿದೆ ಸಾಹಿತ್ಯ:
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು

ಅದೇ ಪ್ರೋಗ್ರಾಮ್ನಲ್ಲಿ ಕೇಳಿದ ಇನ್ನೊಂದು ಹಾಡು:
ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬಾ ಪ್ರೀತಿ
ಈಗ ಯಾಕೆ ಧ್ವನಿಸುತ್ತಿದೆ(?) ಏನೋ ಶಂಕೆ ಭೀತಿ

ಹಾಗೇ ಚಾನೆಲ್ ಸರ್ಫ್ ಮಾಡ್ತಾ ಅಣ್ಣಾವ್ರ ಹಿಟ್ಸ್ ಕೇಳಿ ಮತ್ತೊಮ್ಮೆ ಸೋತೆ ನಾನಾಗ!:)
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ... ಅತಿ ಮಧುರ ರೀ ಆ ಹಾಡುಗಳು! ಅಣ್ನಾವ್ರು ಅವರ ವರ್ಚಸ್ಸು ಉಪಯೋಗ್ಸಿ ಜನರಿಗೆ ಬೇರೆ ಏನ್ ಮಾಡಿದ್ರೋ ಬಿಟ್ಟ್ರೋ ನನಗೆ ಅದು ಬೇಕಿಲ್ಲ! ಸದಭಿರುಚಿಯ ಮನೋರಂಜನೆ ಅಂದ್ರೇನು ಅಂತ ಕನ್ನಡಿಗರಿಗೆ ಒಂದು standard set ಮಾಡಿದ್ರು! ಆ ಅಭಿನಯ, ಭಾಷೆ...ಉಫ್! ರವಿ ಬೆಳಗೆರೆಯವ್ರು ಹೇಳಿದ್ ಒಂದು ಮಾತು ಭಾಳಾ ಹಿಡಿಸ್ತು - ಅಣ್ಣಾವ್ರನ್ನ ನಮ್ಮೆಲ್ಲರ ಪ್ರೀತಿಯ ಕನ್ನಡ ಮೇಷ್ಟ್ರು ಅಂದಿದ್ದು!

ಚಿಕ್ಕ ವಯಸ್ಸ್ನಲ್ಲಿ ಎದುರು ಮನೆಗೆ ಹೋಗಿ (ಆಗ ನಮ್ಮನೇಲಿ ಟಿವಿ ಇರ್ಲಿಲ್ಲ!) ಆಂಟಿ ಕೊಟ್ಟ ಕಡ್ಲೇಪುರಿ ತಿನ್ನುತಾ ನೋಡ್ತಿದ್ದ ಅಣ್ನಾವ್ರ black n white ಚಿತ್ರಗಳು ಇವತ್ತಿಗೂ ಮನಸ್ಸಲ್ಲಿ ಹಸಿರಾಗಿವೆ! ನರಸಿಂಹರಾಜು, ಬಾಲಕೃಷ್ಣ ಅವರುಗಳ ಜೊತೆಯಲ್ಲಿನ ಹಾಸ್ಯ, ಕಲ್ಪನಾ, ಮಂಜುಳಾ, ಭಾರತಿ...ಆ ರೊಮ್ಯಾನ್ಸ್... ಆ ಆದರ್ಶಪುರುಷನ ರೋಲ್ ಗಳು...ಅಣ್ಣಾವ್ರಿಗೆ ಉತ್ತರ ಇಲ್ಲ ಬಿಡ್ರೀ! ಇವತ್ತು ಕಡ್ಲೇಪುರಿ ಕೊಡ್ತಿದ್ದ ಆಂಟಿನೂ ಇಲ್ಲ, ಕಣ್ಣಿಗೆ, ಕಿವಿಗೆ ಹಬ್ಬವಾಗಿದ್ದ ಅಣ್ಣಾವ್ರೂ ಇಲ್ಲ... ಆದ್ರೆ ಅಣ್ಣಾವ್ರ ಚಿತ್ರಗಳು ನಮ್ಮ ಜೊತೆ ಯಾವಾಗ್ಲೂ ಇರುತ್ತ್ವೆ...ಅವುಗಳನ್ನ್ ನೋಡ್ದಾಗ ನೆನಪಿನ ಭಿತ್ತಿಯಲ್ಲಿ ಎಲ್ಲೋ ಕಳೆದುಹೋಗಿದ್ದ ಆಂಟಿಯ ನೆನಪೂ ಸುಳಿದ ಕಿರುನಗೆಯಂತೆ....

ಅಣ್ಣಾವ್ರು ಹೋಗ್ಬಿಟ್ಟ್ರು ಅನ್ನೋ ನ್ಯೂಸ್ ತಿಳಿದಾಗ ಸಡನ್ನಾಗಿ ಆವರಿಸಿದ ಖಾಲಿತನ ಈಗ ನಿಧಾನಕ್ಕೆ ಕರಗ್ತಿದೆ. ಅಣ್ಣಾವ್ರು ಹೋಗೋದು ಅಸಾಧ್ಯ ಅನ್ನೋ ಅರಿವು ಬರ್ತಿದೆ.
ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ...
ಆ ಇನ್ನೋಸೆಂಟ್ ನಗೆ ಆಗೀಗ ಟಿವಿಯಲ್ಲಿ ಮಿಂಚಿ ನಾನಿಲ್ಲೇ ಇದ್ದೀನ್ರಪ್ಪಾ, ಅನ್ಯಾಯವಾಗಿ ಬೆಂಕಿ ಹಚ್ಚಬೇಡಿ ನನ್ನ್ ಹೆಸರಲ್ಲಿ ಅನ್ನ್ತಿರೋ ಹಾಗನ್ನ್ಸುತ್ತೆ!

Wednesday, March 08, 2006

Women's day huh!

Women's day wishes arrive, and a link forwarded by raju just touches that painful sore...

Eve-teasing on streets is a fact most of us girls have convinced ourselves as part of life...
A moment taken out from the 'chaltha hain' life for reflection...
It is one of those few extremely painful moments in life when I have to fight hard to retain my faith in humanity!

Trying to find solace in a mail by rags, a li'l blog post by harish, a couple of scraps by raju, a few words with bro... How i wish all men were as sensitive, sensible!

Tuesday, February 28, 2006

ಕುಲ್ಗೆಟ್ಟ್ ಭಾಷೆ, ಕಂಗ್ಲೀಷು, ಕಂಗಾಲು!

warning: ಕನ್ನಡದಲ್ಲ್ ಸಂಸ್ಕೃತ ಮಾತಾಡಿ/ ಕೇಳಿ ಅಭ್ಯಾಸ ಇಲ್ಲ್ದೇರೋವ್ರು please stay away. ನಂಗೆ ಶಾನೆ ಕೋಪ ಬಂದಿರೋದ್ರಿಂದ ಜೇಡ್ರಳ್ಳಿ style ಬರೋ ಎಲ್ಲಾ ಸಾಧ್ಯತೆಗಳೂ ಇವೆ!:D

ನೆನ್ನೆ ಹಿಂಗೇ ಎಲ್ಲೋ ಬೀದಿ ಸುತ್ತ್ಕೊಂಡ್ ಮನೆಗ್ ಬರ್ತಿದ್ದೆ. ಜೊತೆಗೆ ಇದ್ದವ್ರು ಇಬ್ರು. ಇಬ್ರೂ ಇಲ್ಲಿಯವ್ರೇ. ಕನ್ನಡ ಮಾತಾಡಕ್ಕ್ ರೋಗ! ಹಾಳಾಗೋಗ್ಲಿ ಇಂಗ್ಲಿಷ್ ಚೆನ್ನಾಗ್ ಬಂದ್ರೆ ತಡ್ಕೋ ಬಹುದು! ಕೆಲ್ವು samples:
'sooooo many times i called to him ya! even morning i told to him to come to here'
'please remeber me to call to him ya'(ಇಂಥಾ ನುಡಿಮುತ್ತು ಉದ್ರ್ಸ್ತಿದ್ರೆ ನಿನ್ನ ಮರ್ಯೋದಾದ್ರೂ ಹೇಗೆ!)
ಕೆಂಬೂತ ನವಿಲ್ಗರಿ ಸಿಕ್ಕ್ಸ್ಕೊಂಡು ಕುಣೀತಂತೆ! ಎತ್ತ್ ಒದ್ಯಣ ಅನ್ನ್ಸುತ್ತೆ! ಯಾವ್ದಾದ್ರೂ ಭಾಷೆ ಮಾತಾಡಿ, atleast ಸರ್ಯಾಗಿ ಮಾತಾಡಿ! ಇತ್ಲಾಗೆ ಕುವೆಂಪು ಕನ್ನಡಾನೂ ಗೊತ್ತಾಗಲ್ಲ, ಅದು ಹೋಗ್ಲಿ ಅಂದ್ರೆ Indian english-U ಬರಲ್ಲ! ಸರಿ ಸೀದಾ ಸಾದಾ ಬೆಂಗ್ಳೂರ್ಕನ್ನಡ ಮಾತಾಡಿ ಅಂದ್ರೆ ಹರ್ಕ್ಲು ಇಂಗ್ಲಿಷ್ನಲ್ಲೇ ಸ್ಕೋಪು!

ಭಾಷೆ ಇರೋದು communicationಗೆ ಅನ್ನೋದು ಮರ್ತು ಇಲ್ಲ್ದೇರೋ ಪ್ರತಿಷ್ಠೆ ಮೆರ್ಸಕ್ಕ್ ಹೋಗೋವ್ರಲ್ಲಿ ಇದೊಂದು type ಆದ್ರೆ, ಕೆಟ್ಟ್ ಕುಲ್ಗೆಟ್ಟೊಗಿರೋ ಅಮೆರಿಕನ್ accentನಲ್ಲಿ ಬಡ್ಬಡಾಯ್ಸೋದು ಇನ್ನೊಂದ್ ಗುಂಪು!
ನಾನು ಕನ್ನಡ ಬಾವುಟ ಎತ್ತ್ಕೊಂಡುಹೋಗಿ ಗೌರಿಶಂಕರದಲ್ಲಿ(Mt Everest ಕಣ್ರಪ್ಪಾ ಥೇಮ್ಸ್ ನನ್ನ್ ಮಕ್ಕಳ್ರಾ!) ನೆಡ್ಬೇಕು ಅನ್ನೋದಿಲ್ಲ. ಶೇಕ್ಸ್ಪಿಯರು ಸಮಾಧಿನಲ್ಲಿ ಒದ್ದ್ಲಾಡ್ದೇರೋ ಥರ ಇಂಗ್ಲಿಷ್ ಮಾತಾಡಿ ಅಂತನೂ ಹೇಳಲ್ಲ. ಆದ್ರೆ ಕನ್ನಡವೂ ಇಂಗ್ಲಿಷೋ ಕಂಗ್ಲಿಷೋ (ನನ್ನ್ ಭಾಷೆ ಈ ಕುಲ್ಗೆಟ್ಟ್ ಕಂಗ್ಲೀಷೇ ಅಂತ ಕುವೆಂಪು ಮುತ್ತಾತ, ಶೇಕ್ಸ್ಪಿಯರ್ ಕೋಲ್ತಾತನ್ ಥರ 'ಶುದ್ಧ ಭಾಷೆ'ಗಳನ್ನ ಮಾತಾಡೋ ಒಬ್ಬ ಫ್ರೆಂಡು ಹೇಳ್ತಿರ್ತಾನೆ/ ಬೈತಿರ್ತಾನೆ:P) ನಾವು ಮಾತಾಡೋದು ಎದುರು ಇರೋವ್ರಿಗೆ ಅರ್ಥ ಆಗೋದು ನಮ್ಮ್ priority ಆಗಿರ್ಬೇಕಲ್ಲ್ದೇ ದೊಂಬರಾಟ ಆಗ್ಬಿಡ್ಬಾರ್ದಲ್ಲ್ವ?!

ಈ ಕುವೆಂಪು ಮುತ್ತಾತ/ ಶೇಕ್ಸ್ಪಿಯರ್ ಕೋಲ್ತಾತನ್ ಬಗ್ಗೆ ಮಾತಾಡ್ತಾ ಒಂದು incident ನೆನಪಾಗತ್ತೆ. ಒಂದ್ಸಲ ಈ ಮಹಾಶಯನ್ ಹತ್ರ ಕೆಲವು ಹುಲು ಮನುಷ್ಯರು - ಅವ್ರೂ ನನ್ನ್ ಫ್ರೆಂಡ್ಸೇ (ಹೌದು, ನನ್ನ್ ಫ್ರೆಂಡ್ಸ್ ಲಿಸ್ಟು ಯಾವ್ zoo gardenಗೂ ಕಡಿಮೆ ಇಲ್ಲ - ಎಲ್ಲಾ ನಮೂನಾಗಳೇ!:)) - ಮಾತಾಡ್ತಿದ್ದ್ರು. ಈ ಪುಣ್ಯಾತ್ಮನ್ನ ಹಾಸ್ಟಲ್ನಲ್ಲಿ ಊಟ ಚೆನ್ನಾಗಿದೆ ಅಲ್ಲ್ವಾ ಅಂದ್ರೆ 'ಮೊದಮೊದಲು ಹಾಗನ್ನಿಸ್ತಿತ್ತು ನನಗೂ, ಈಗ ಏಕತಾನತೆ ಕಾಡತ್ತೆ' ಅಂತ royal ಆಗಿ ಅಚ್ಚಕನ್ನಡದಲ್ಲಿ ನುಡಿಮುತ್ತು ಉದುರ್ಸಿಬಿಟ್ಟಿದಾನೆ! ಈ ಪ್ರಾಣಿಗಳರಡು ಕಣ್ಣ್ ಕಣ್ಣ್ ಬಿಟ್ಟ್ಕೊಂಡು, ಮುಖ ಮುಖ ನೋಡ್ಕೊಂಡು ಇದು ನಮ್ಮ್ levelಗೆ ಮೀರಿದ್ದು ಅಂತ ತೆಪ್ಪ್ಗಾಗಿ ಆಮೇಲೆ ಬಂದು ನನ್ನನ್ನ ಕೇಳ್ದ್ರು! ಏಕತಾನತೆ ಅಂದ್ರೆ monotony ಅಂತ ವಿವರಿಸ್ದಾಗ ಒಂದು ದೊಡ್ಡ್ ಓಹೋನೂ ಬಂತು!:))

ಇದನ್ನ ನೋಡ್ತಿದ್ದಾಗ ಭಾಷೆನ ಕಲ್ಸೋ ರೀತಿನಲ್ಲೇ ಎಲ್ಲೋ ಎಡವಟ್ಟಾಗಿದೆಯೇನೋ ಅನ್ನ್ಸುತ್ತೆ. ಈ caseನಲ್ಲಂತೂ ಒಂದ್ಸ್ವಲ್ಪ logic ಉಪ್ಯೋಗ್ಸಿದ್ರೆ ಸ್ವಲ್ಪ scientificಆಗಿ ಭಾಷೆನ ಕಲ್ತಿದ್ರೆ ಏಕ=mono ತಾನ=tone ಅಂತ ಸುಲಭವಾಗಿ ಅರ್ಥ ಮಾಡ್ಕೋಬಹುದುತ್ತು. ನಮ್ಮಮ್ಮ ನಾನು ಚಿಕ್ಕವ್ಳಿದ್ದಾಗ ಭಾಷೆ ಕಲಿಸ್ತಾ, ಕನ್ನಡವೇ ಆಗ್ಲಿ ಇಂಗ್ಲಿಷೇ ಆಗ್ಲಿ, mug up ಮಾಡು ಅನ್ನದೇ ಪದಗಳನ್ನ, spellingsನ, ಅರ್ಥದಮೇಲೆ, pronunciation ಮೇಲೆ ಬಿಡಿಸಿ ಕಲಿಯೋದನ್ನ ಹೇಳ್ಕೊಟ್ಟ್ರು - ನನ್ನ್ ಪುಣ್ಯ! ಅಷ್ಟೇ - ಅದನ್ನ್ ಬಿಟ್ಟು ಯಾವ ಹೋಮ್ ವರ್ಕೂ ಕೂತು ಮಾಡಿಸ್ಲಿಲ್ಲ, ಯಾವ ಪಾಠನೂ ಓದ್ಸ್ಲಿಲ್ಲ. ಎಲೆಗಳನ್ನ ಹಸಿರು ಮಾಡೊದು ಯಾವ್ದು ಅನ್ನೋದಕ್ಕೆ ನನ್ನ್ ಮಿಕ್ಕೆಲ್ಲಾ classmates ಪತ್ರ ಹರಿತ್ತು ಅಂತ ಉತ್ತರ ಗಟ್ಟ್ ಹೊಡೀತಿದ್ದಾಗ ನಾನು ಆರಾಮಾಗಿ ಪತ್ರ=ಎಲೆ, ಹರಿತ್ತು=ಹಸಿರು ಅದರಲ್ಲಿ ತಲೆಕೆಡ್ಸ್ಕೊಂಡು ಗಟ್ಟು ಹೊಡ್ಯೋದೇನಿದೆ ಅನ್ಕೋತಿದ್ದೆ! ಈಗಂತೂ ಭಾಷೆಗಳಿಗೆ ನಮ್ಮ್ curriculumನಲ್ಲಿ ದಿನೇ ದಿನೇ importance ಕಡಿಮೆಯಾಗ್ತಿದೆ. science/ engineering ಆದ್ರಂತೂ ಕೇಳೊದೇ ಬೇಡ! ಭಾಷೆಗೂ ತಮ್ಗೂ ಸಂಬಂಧನೇ ಇಲ್ಲ ಅಂತ ಒಂದೇ ಸಲ ಕೈತೊಳ್ಕೊಂಡ್ಬಿಡ್ತಾರೆ ನಮ್ಮ್ ಹುಡುಗ್ರು! VTU VC language papers introduce ಮಾಡ್ದಾಗ ಊರಲ್ಲಿರೋ ಇಂಜಿನೀರಿಂಗ್ ಹುಡುಗ್ರೆಲ್ಲಾ ಹಿಡಿ ಹಿಡಿ ಶಾಪ ಹಾಕಿದ್ರು!
ಊರ್ ತುಂಬಾ ಇಂಜಿನೀರ್ಸೇ ತುಂಬ್ಕೊಂಡಿರೋ ಬೆಂಗ್ಳೂರಲ್ಲಿ ಅವ್ರಿಗೆಲ್ಲ ಸಾಹಿತ್ಯ ಬಿಡಿ, ಭಾಷೆನೂ ಸರ್ಯಾಗಿ ಬರ್ದೇ ಇದ್ದ್ರೆ ಸುಮ್ಮ್ನೆ ಕನ್ನಡಕ್ಕೆ ಅವಮಾನ ಆಗ್ತಿದೆ, ನಮ್ಮ್ ಭಾಷೆಗೆ ಸ್ಥಾನ ಸಿಗ್ತಿಲ್ಲ ಅಂತೆಲ್ಲಾ ಒದರಿದ್ರೆ ಅದಕ್ಕೊಂಡು ಬೆಲೆಯಾದ್ರೂ ಹೇಗೆ ಸಿಗತ್ತೆ!

ಭಾಷೆಯೆಂಬುದು ಮಗಳೆ ಮಾನವನ ಆಸೆ....ಅಂತ ಪ್ರೈಮರಿ ಸ್ಕೂಲ್ನಲ್ಲಿ ಓದಿದ ದಿನಕರ ದೇಸಾಯಿಯವ್ರ ಚುಟುಕ ನೆನಪಾಗತ್ತೆ!

ಏನೇನೋ ಬರ್ದ್ಬಿಟ್ಟಿದೀನಿ - ಇದನ್ನ ಬರ್ಯೊಕೆ ಶುರು ಮಾಡಿದ್ದ್ ದಿನ ಮೆಟ್ಟ್ಕೊಂಡಿದ್ದ ಜೇಡ್ರಳ್ಳಿ ಭೂತ ಇವತ್ತು ನನ್ನ ಹಿಂದೆ ಇಲ್ಲ, ಆದ್ರೆ ಭಾಷೆಗಳ್ ಬಗ್ಗೆ ನನ್ನ ಯೋಚನಾ ಲಹರಿ ಹರೀತಾನೇ ಇದೆ...

Saturday, February 18, 2006

yaaaawn!

itz a saturday afternoon n im in office for a change! its quite sunny outside, and i am jobless...have hogged on idiyappams n dOsas like there is no tomorrow, and all i want to do is...i dont know! absolute lethargy hits me when im content...with food or life...

scribbling words as they come in...thoughts i am forcing myself to get into...just so that i am not found sleeping in office! logged into orkut...not much seems to happen there too on saturday afternoons...oh man everyone else mus b having a nice siesta! i wanna sleeeeeeeeeeeeep!

when the stomach is full, its hard to remember we eat to live! and when its empty, its hard to resist living to eat! damn it! i cant think nw! n nobody on msngr either! what a lazy afternoon! sleep sree, its better to sleep than fill ur blog wt crap! or is it? is a poor attempt better than none? may be... or may not be when you very well know its a poor one?

Wednesday, February 15, 2006

Painting the city red?!

I see the city painted red...n I feel sick!
I was on my way to office...as usual in the trichakra yaana...we pass the main road n I see hoards of girls...many look like school kids...some college kids too...many from the lower or middle class backgrounds...almost all dressed in red, paying their tribute to St Valentine! n I feel sick!
no, no, I am not one of those flag bearing, slogan shouting culture police types. In fact I feel sick when I see/hear/read about them too. I believe in individual freedom, human rights and all dat 'typical urban middleclass pseudo intellectual' notions.
Nor am I a cynic...a 'hoovu haasige chandra chandana' or a 'dard ke phool'is very much part of my dreams...n life. A 'die-hard romantic' would be the term.
But I felt sick yeasterday...
If couples have a nice evening together and the bahaana of Valentines jus adds flavour, who am I to crib! Our culture is quite strong based for a poor St Valentine to shatter it. It is irritating the way the culture police reacts to this...getting the couple married! how ridiculous can they get! A bunch of jokers who make hell out of others lives!
Back to the girls on the main road. Yep, its but natural in that age(he he! yes, today i am feeling like a grandma!) to get attracted to the other sex. But the mass hysteria over getting a valentine! Jus see what it is doing to their lives! I did have my share of crushes(ya ya, I continue to have a fair share to date:D)...but there were other things in life that were important too...studies, literature, music, friends... Somehow this excessive hype over valentines n the bf/gf aquisitions make me feel these ppl are messing up their lives. These are the formative years in one's life, and if one gets the priority wrong, life can just turn into a huge regret later. n I feel all the hype of this card-culture is jus the raajmaarg to that! I feel these kids dont know how to handle life...may be I am realy growing old! I dunno why I felt for them...I jus felt sick... Is there a way out?!

Tuesday, February 14, 2006

RDB finally!

So its me catching up with the RDB fever on blogsphere(Blogger search says 5,166 blogs on it to date!), or the fever catching up with me!:) Bro watched in the first week of release, went on a high, watched again in the second week, higher! couldnt stop him from yapping on the movie, n hence decided to go! As is with most of my decisions, it took time to turn into reality:D
Finally watched the movie on Saturday with a bunch of friends... Sant competing with Rahman, Deeps thrusting the inedible corn down the throat...urs truly trying to manage my cuppa wt the corns, boiled or popped!:) n then I hear about Surya's blog(check the link) on RDB... As u would have realized by now, this will not be a strict review of the film, but my own chaotic personal journey with the film:) so may b u shud get ur bowl of popcorn(ok rags, u can go for the cream n cheese!:)) n read on:)

the peppy yuppie college gang, with all the masthi n the confusions about tomorrow... Totally identifiable for any urban college goer('college-goner' shud I add?:D) with the paDhayiwala ilzaam intact!:) an idealist in their midst...n the end he meets... I felt the film maker could have dealt with the relationship in little more detail. What Maddy meant to them shud have been clearer to understand what his story did to them.

That brings me to the point - Rang de Basanti is definitely not a very well made movie. But that does not deter me from adding it to my fav's list. There are flaws, in the way the movie has dealt with the emotional intensity of the situation. But if u r talking about the ending - I agree wt Surya, none of us could have given it a better/worse ending. In fact, the ending in the film is not really the end, but the beginning of questions, thoughts... It is rather a provocation for us to think, and I could see the film leaving that effect on many of us. We ourselves stood there talking, thinking and analysing it and finally had to be chased out of the movie hall! As I told Sant then, very few movies make you think, and RDB wins hands down on this.

A movie like this was badly needed...for all of us who had stopped thinking and acting and were reduced to armchair critics.

Coming to other aspects, yes, liked the music(need I say dat, given that the GOD himself composed it!:) ). camera work(thanks sant, for 'drawing' my attention to it!:))... editing cud have been tighter in the second half... but the way the film interweaves(spellcheck says the word doesnt exist! but who cares!) the bhagath singh, jaliyanwalabagh stories n the story of the college gang is perhaps the best tribute to the revolutionaries. None of the spade of Bhagath Singh movies that saw the light last year brought these people as close to us as RDB does. It was a thrilling experience for me to watch the Kakori episode n the murder of Scott(?), having read these stories as a kid thanx to my rightist dad! But I was left helpless when Deeps asked me why they killed this man(Scott r sm sch British officer) who was jus walking away. Between the right and the left and the nowheres, history texts have left our generation clueless!

The characters are quite representative, covering a wide spectrum...n the performances are great...Aamir, Maddy, siddharth, Kunal,Sharman...even Soha! Siddharth joins my list!:D Oh yes, but as a girl, i was disappointed...Even when somebody like Rakesh Mehra sets out to think differently, jus one grand 'maar Daalo' for the girl?? Anyway...saw a reflection of my own disillusionment in Atul Kulkarni's role...but the way he sprang back to action is a lesson for me, to get going again, start thinking again!

So how was the rollercoaster?!:) Bet U folks wont bug me into blogging now on!:D

Surya on RDB
the movie

Friday, January 13, 2006

ಬ್ಲಾಗ್ ಷುರ್ ಮಾದ್ತಿದ್ಧಾಗೇ ಹಬ್ಬ ಬಂದ್ಬಿಟ್ಟಿದೆ, ಅಕಸ್ಮಾತ್ತಾಗಿ ಎನಾದ್ರೂ ಯಾರಾದ್ರೂ ಹಬ್ಬದ್ ದಿನ ನನ್ ಬ್ಲಾಗ್ ದರ್ಶನ ಮಾದ್ತಾ ಇದ್ದ್ರೆ, ನಿಮ್ಗೆ ಸಡಗರದ ಸಂಕ್ರಾಂತಿಯ ಸಿಹಿ ಹಾರೈಕೆಗಳು!:)

What else could it be but a taste of things to come!

So finally i bow down to the Godess of (or the madness called!) blogdom!

But hold on! Jus wondering why i jumped into the bandwagon? Me wondering too!:))

Or perhaps I know... a space to dump all the junk that is there in the upper chamber? may be not all, but some at the least!

Have been reading a few blogs for a while..some autobiographical, some on specific subjects, some general arm chair expertise on everything under the sun! So what is mine going to be... a daily soap? a diary? a journal? mmm... have not made up mymind as yet!:D may be all of these, and more! The only thing I know is im gonna freak out! n people say its fun when i do that :D So watch out!:)